HomeEducation › ಒಂದು ಸುಂದರ ಮನಸ್ಸು: ಕಾರಂತರ ಶೈಕ್ಷಣಿಕ ಕಾರ್ಯದತ್ತ ಮರುನೋಟ

Cover of ಒಂದು ಸುಂದರ ಮನಸ್ಸು: ಕಾರಂತರ ಶೈಕ್ಷಣಿಕ ಕಾರ್ಯದತ್ತ ಮರುನೋಟ

ಒಂದು ಸುಂದರ ಮನಸ್ಸು: ಕಾರಂತರ ಶೈಕ್ಷಣಿಕ ಕಾರ್ಯದತ್ತ ಮರುನೋಟ

ಮಂಜುನಾಥ್, ಎಸ್ ವಿ

FormatEbook
LanguageKannada
ReadingIncluded
Full text being prepared Keep a copy ₹9
About this book
ಜ್ಞಾನಪೀಠ ಪ್ರಶಸ್ತಿ ವಿಜೇತರಾದ ಕೋಟ ಶಿವರಾಮ ಕಾರಂತರು ಒಬ್ಬ ಒಳ್ಳೆಯ ಶಿಕ್ಷಣ ತಜ್ಞರೂ ಆಗಿದ್ದರು. ಈ ಲೇಖನದಲ್ಲಿ ಅವರ ಶೈಕ್ಷಣಿಕ ವಿಚಾರ, ಸಾಧನೆ ಮತ್ತು ಪ್ರಯೋಗಗಳ ಒಂದು ಪರಾಮರ್ಶನವಿದೆ. ಕಾರಂತರ ಶೈಕ್ಷಣಿಕ ಪ್ರಯೋಗಗಳು ಅವರ ಕಾಲಕ್ಕಿಂತಲೂ ಬಹಳ ಮುಂದಿದ್ದವು. ಶಿಕ್ಷಣವೆಂದರೆ ಮಕ್ಕಳನ್ನು ಸುಶಿಕ್ಷಿತರನ್ನಾಗಿಸುವುದರ ಜೊತೆಗೆ ಅಸ್ಪೃಶ್ಯತೆ, ಮೂಢನಂಬಿಕೆ, ಮದ್ಯವ್ಯಸನ ಮುಂತಾದ ಅನಿಷ್ಟಗಳ ನಿವಾರಣೆಯೂ ಶೈಕ್ಷಣಿಕ ಹೊಣೆಗಾರಿಕೆಯೇ ಆಗಿದೆ ಎಂದು ಅವರು ಭಾವಿಸಿದ್ದರು. ಕಾರಂತರು ʼಸ್ವದೇಶಾಭಿಮಾನಿʼ ಎಂಬ ಪತ್ರಿಕೆಯ ಸಂಪಾದಕರ ಸೂಚನೆಯಂತೆ ರಾಜ್ಯದಾದ್ಯಂತ ಪ್ರವಾಸ ಕೈಗೊಂಡು ನಾನಾ ಶಾಲೆಗಳಿಗೆ ಭೇಟಿ ನೀಡಿದರು. 1934ರಲ್ಲಿ ಪುತ್ತೂರಿನಲ್ಲಿ ʼಬಾಲವನʼ ಎಂಬ ಶಾಲೆಯನ್ನೂ ಪ್ರಾರಂಭಿಸಿದರು. ಅಲ್ಲಿ ಮಕ್ಕಳಿಗೆ ಕೇವಲ ಎರಡು ಗಂಟೆಗಳ ಕಾಲ ಪಠ್ಯಕ್ರಮ ಬೋಧನೆ ಇರುತ್ತಿತ್ತು ಉಳಿದಂತೆ ಮಕ್ಕಳಿಗೆ ಸುತ್ತಲಿನ ಪರಿಸರವನ್ನು ಕುತೂಹಲದಿಂದ ಗಮನಿಸುವ, ಆ ಮೂಲಕ ಸರ್ವತೋಮುಖವಾಗಿ ಬೆಳೆಯುವ ಅವಕಾಶವಿತ್ತು. ತಮ್ಮ ಶಾಲೆಯಲ್ಲಿ ಎನ್‌ ಸಿ ಸಿ,, ಎನ್‌ ಎಸ್‌ ಎಸ್‌ ನಂತಹ ಸಂಸ್ಥೆಗಳಲ್ಲಿ ನಡೆಯುತ್ತಿದ್ದ ಚಟುವಟಿಕೆಗಳನ್ನು ಆ ಕಾಲಕ್ಕೇ ಅಳವಡಿಸಿಕೊಂಡಿದ್ದರು. ಕಾರಂತರು ಪರ್ಯಾಯ ಪಠ್ಯಪುಸ್ತಕಗಳನ್ನು ಸಹ ಸಿದ್ಧಪಡಿಸಿದ್ದರು. ಆದರೆ ಅವರ ಬಾಲವನ ಬಹುಕಾಲ ನಡೆಯಲಿಲ್ಲವಾದರೂ ತರಂಗ ಮಾಸಪತ್ರಿಕೆಯಲ್ಲಿ ಸುಮಾರು ಹತ್ತು ವರ್ಷಗಳ ಕಾಲ ʼಬಾಲವನದಲ್ಲಿ ಕಾರಂತಜ್ಜʼ ಎಂಬ ಅಂಕಣದಲ್ಲಿ ಮಕ್ಕಳ ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದರು. ಬದುಕಿನಲ್ಲಿ ನಿಜವಾದ ಸಂತೃಪ್ತಿಯನ್ನು ಕಾಣುವುದು ಶಿಕ್ಷಣದ ಉದ್ದೇಶವೆಂಬುದು ಕಾರಂತರ ವಿಚಾರವಾಗಿದೆ.

More by ಮಂಜುನಾಥ್, ಎಸ್ ವಿ

Browse all →

More in Education

Browse all →