HomeEducation › ಜಡತ್ವದಿಂದ ಕ್ರಿಯಾಶೀಲತೆಯ ಕಡೆಗೆ

Cover of ಜಡತ್ವದಿಂದ ಕ್ರಿಯಾಶೀಲತೆಯ ಕಡೆಗೆ

ಜಡತ್ವದಿಂದ ಕ್ರಿಯಾಶೀಲತೆಯ ಕಡೆಗೆ

ಗಿರಿಧರ್, ಎಸ್.

FormatEbook
LanguageKannada
ReadingIncluded
Full text being prepared Keep a copy ₹9
About this book
ಮಾರನಾಳ್‌ ‘ಜಿಎಚ್‌ಪಿಎಸ್‌’ ಶಾಲೆಯು ವಿಶಿಷ್ಟ ಗುಣಲಕ್ಷಣಗಳನ್ನು ಹೊಂದಿದ್ದು, ಶಾಲೆಯ ಗುಣಮಟ್ಟವನ್ನು ಬಿಂಬಿಸುತ್ತದೆಂಬ ವಿಷಯವನ್ನು ಲೇಖಕರು ಈ ಲೇಖನದಲ್ಲಿ ತಿಳಿಯಪಡಿಸಿದ್ದಾರೆ. ಉತ್ತಮ ಶಿಕ್ಷಕರ ತಂಡದ (ಸೋಮಶೇಖರ್‌, ಶಾಖಾಂಬರಿ ಮರಿಯಪ್ಪ, ಗೀತಾ, ಯಲ್ಲಗಿರಿಯಪ್ಪ) ಪರಿಶ್ರಮದಿಂದಾಗಿ, ಶಾಲೆಯಲ್ಲಿನ ವಿದ್ಯಾರ್ಥಿಗಳಿಗೆ ಅನೇಕ ಸೌಲಭ್ಯಗಳನ್ನು ಒದಗಿಸಲಾಗಿದೆ. ಬೋಧನೆಯಲ್ಲಿ, ಶೈಕ್ಷಣಿಕ ಸಾಧನಗಳನ್ನು ಪರಿಣಾಮಕಾರಿಯಾಗಿ ಬಳಸಲಾಗುತ್ತಿದೆ. ಪ್ರಯೋಗಗಳ ಮೂಲಕ ವೈಜ್ಞಾನಿಕ ಪ್ರಕ್ರಿಯೆಗಳ ಬಗ್ಗೆ ಮಕ್ಕಳಲ್ಲಿ ಅರಿವನ್ನು ಮೂಡಿಸಲಾಗುತ್ತದೆಯಲ್ಲದೆ, ಮಕ್ಕಳ ಪ್ರಗತಿಯನ್ನು ತಿಳಿಸಲು, ಪೋಷಕರೊಂದಿಗೆ ಸಭೆಗಳನ್ನು ಆಯೋಜಿಸಲಾಗುತ್ತದೆ. ಶಾಲೆಯಲ್ಲಿ ವಿವಿಧ ಚಟುವಟಿಕೆಗಳನ್ನು ಹಮ್ಮಿಕೊಳ್ಳುವ ಮೂಲಕ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಅವಕಾಶವನ್ನು ನೀಡಲಾಗಿದೆ. ಉತ್ತಮ ಒಡನಾಟದೊಂದಿಗೆ ಸಮುದಾಯದ ಬೆಂಬಲವನ್ನು ಪಡೆಯುವಲ್ಲಿ, ಶಿಕ್ಷಕರ ಮುತ್ಸದ್ದಿತನವು ಎದ್ದು ಕಾಣುತ್ತದೆ. ಶಾಲೆಯ ಅವ್ಯವಸ್ಥಿತ ಪರಿಸರವನ್ನು ಸುವ್ಯವಸ್ಥಿತಗೊಳಿಸುವಲ್ಲಿನ ಶಾಲಾ ಸಿಬ್ಬಂದಿಯ ಅನನ್ಯ ಕರ್ತವ್ಯನಿಷ್ಠೆಯು ಮಹತ್ವಪೂರ್ಣವಾದುದು.

More by ಗಿರಿಧರ್, ಎಸ್.

Browse all →

More in Education

Browse all →